Followers

Sunday, May 19, 2019

ನನ್ನ ಮನದಾಳದಿಂದ ಮೂಡಿದ ವೇದನೆಯ ಹಾಡು


ನಾ ಹೆಣವಾಗುವ ಮುನ್ನ
ನನ್ನ ಮನದಾಳದಿಂದ ಮೂಡಿದ ವೇದನೆಯ ಹಾಡು 


ಪಾಪವ ಮಾಡಿದ ಮನುಜನು ನಾನು ಮನ್ನಿಸೋ ದೇವಾ //
//ನನ್ನ // ಮನ್ನಿಸೋ ದೇವ . ನಿ...ನನ್ನ ಮನ್ನಿಸೋ ದೇವಾ //ಪ//
ಯಾವ ಜನ್ಮದ ಪಾಪದ ಪಲವೋ....../2/ ಅ...ನಾಥ..ನಾದೆ ನಾನ
ಈ ಜನುಮದಿ ದಿಕ್ಕಿಲ್ಲದವನಾದೆ ನಾನ
//ಪಾಪವ ಮಾಡಿದ ಮನುಜನು//
ಅಮ್ಮನ ಮಡಿಲಲ್ಲಿ ಮಗುವಾಗೋ ಆಸೆ / ಅಮ್ಮನ ಕೊನೆತುತ್ತ ತಿಂದು ಸಾಯೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ        
//ಪಾಪವ ಮಾಡಿದ ಮನುಜನು//
ಅಪ್ಪನ ಭುಜಕೆ ಭುಜವಾಗೋ ಆಸೆ / ಅಪ್ಪನ ಅಪ್ಪಿಕೊಂಡು ಬದುಕೊವಾಸೆ
/ಅಪ್ಪನಾಗೋ ದೇವಾ/
ನನ್ನ ಅಪ್ಪನಾಗೋ ದೇವ // ನಿ ನನ್ನ ಅಪ್ಪನಾಗೋ ದೇವ
//ಪಾಪವ ಮಾಡಿದ ಮನುಜನು//
ಮುದ್ದಿನ ತಂಗಿಗೆ ಅಣ್ಣನಾಗೋ ಆಸೆ  / ನಲ್ಮೆಯ ತಮ್ಮನ ಬಲವಾಗೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//
ಮಡದಿಯ ಪ್ರೀತಿಯಲ್ಲಿ ತೆಲಾಡೋ ಆಸೆ // ಮಕ್ಕಳ ಜೊತೆಗೂಡಿ ಆಟವಾಡೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//

ರಾ ದೇ ಕಾರಭಾರಿ

Thursday, May 9, 2019

ನಿ ಬದಕಾಕ ಬಿಡವಲ್ಲಿ ಯಾಕ


ಮಾಡಿದಿಯಲ್ಲೇ ನನಗ ಮೋಸಾ...
ಹಾಕಿದಿಯಲ್ಲೇ ಯಮನ ಪಾಷಾ.. /ಪ/
ನಗಲಾಕ ಬಿಡವಲ್ಲಿ ನನ್ನ...
ನಿ ಬದಕಾಕ ಬಿಡವಲ್ಲಿ ಯಾಕ... /2/

ಕಣ್ಣಿನ ನೋಟಕ್ಕ ಮಳ್ಳಾದೆ ನಾನ... ಸುಳ್ಳಾಯ್ತು ಈ ಪ್ರೀತಿ ಬದುಕ //
ಬದುಕಿನ ತುಂಬಾ ನಿನಿರಬೇಕಂತ / ಕಟಕೊಂಡ ಆ ಸುಳ್ಳ ಕನಸ /
ಕಟಕೊಂಡ ಆ ಸುಳ್ಳ ಕನಸ / ನಾ / ಕಟಕೊಂಡ ಆ ಸುಳ್ಳ ಕನಸ

ಮಾಡಿದಿಯಲ್ಲೇ ನನಗ ಮೋಸಾ...
ಹಾಕಿದಿಯಲ್ಲೇ ಯಮನ ಪಾಷಾ.. /ಪ/
ನಗಲಾಕ ಬಿಡವಲ್ಲಿ ನನ್ನ...
ನಿ ಬದಕಾಕ ಬಿಡವಲ್ಲಿ ಯಾಕ... /2/

ಮನಸಿನ ತುಂಬಾ  ನಿನ್ನದೇ ಚಿತ್ತಾರ... ಬಿಡಿಸಿದ್ದೆ ಒಂದು ಘಳಿಗ್ಯಾಗ
 ಬಿಡಿಸಿದ ರಂಗೋಲಿ ಅಳಸಿ ಹೋದಂಗ / ಹೊದ್ಯಲ್ಲ ಈ ಜೀವದಿಂದ /
ಹೊದ್ಯಲ್ಲ ಈ ಜೀವದಿಂದ / ನಿ / ಹೊದ್ಯಲ್ಲ ಈ ಜೀವದಿಂದ

ಇಂತಿ ನಿಮ್ಮ ಪ್ರೀತಿಯ
ರಾದೇ....ಕಾರಭಾರಿ

ಅವಳಿಗಾಗಿ ಒಂದು ಹಾಡು, ಮನದಾಳದಿಂದ ಬರೆದದ್ದು

ಸುನಾ ಸುನಾ ದಿಲ್.


(ಅವಳ ಅಂದವ ನೋಡಿ ಹೆಳಿತು ಈ ಮನಸು)

ಸುನಾ ಸುನಾ ಲಗತಾ ಮುಜೆ
ನಿನು ಇಲ್ಲದೆ
ಸೊನಾ ಚಾಂದಿ ಎನೂ ಬ್ಯಾಡ ನಿನೊಬ್ಬಳೆ ಸಾಕೆ.

(ಆ ದಿನ ಅವಳ ಕಂಗಳ ನೊಡಿ ನನಗೆ ಹಾರ್ಟ ಅಟ್ಯಾಕ ಆದ ಅನುಭವ ಕಣ್ರಿ)

ನಿನ್ನ ಕಣ್ಣ ನೋಡಿ ಆಯ್ತು ಯನಗೆ ಹಾರ್ಟು ಅಟ್ಯಾಕು.
ಮೆರೆ ಸಪನೆಮೆ ಆಜಾ ಚೊರಿ ಬ್ಯಾಡ ದಿಮಾಕು

(ಅವಳ ಬಳಕುವ ಸೊಂಟ ನೊಡಿ ನವಿಲ ನಾಟ್ಯ ನೋಡಿದ ಹಾಗಾಯ್ತು)

ನಿನ್ನ ಬಳಕುವ ಸೊಂಟ ನೊಡಿ ಎದೆ ಹೊಡದ್ಹೊಯ್ತು
ಮೆರೆ ದಿಲ ತೊ ಅಬ ಪಾಗಲ ಹುವಾ ನಿನ್ನ ಪಡೆಯಲು

(ಅಬ್ಬಾ ಆ ಸೂರ್ಯನಿಗೆ ಸಾಟಿ ಯಾರೂ ಇಲ್ಲ ಅನ್ಕೊಂಡಿದ್ದೆ ಆದರೆ ಸೂರ್ಯನೊಗೆ ಟಾರ್ಚು ಹಿಡಿಯಿತು ಅವಳ ಕಂಗಳು)

ಆ ಸೂರ್ಯನಿಗೂ ಟಾರ್ಚು ಹಿಡಿತು ನಿನ್ನ ಕಂಗಳು
ತೆರೆ ಆಂಕೊಂಕೊ ಫಿದಾ ಹುವಾ ನನ್ನಯ ಮನಸು

ನಿನ್ನ ಪ್ರೀತಿಯ
ರಾದೇ....ಕಾರಭಾರಿ 

Tuesday, May 7, 2019

ಹೇ ಮನಸೆ ನಿನ್ಯಾಕೆ ಹಿಗೆ

ಹೇ ಮನಸೆ ನಿನ್ಯಾಕೆ ಹಿಗೆ 

ಹೇ ಮನಸೇ ನೀನು ಯಾಕೆ ಹೀಗೆ
ಅವಳು ಚಂದದ ಗೊಂಬೆ ಅಂದದ ಗೊಂಬೆ ಕರ್ಪೂರದ ಗೊಂಬೆ ಅನ್ನೊದೆಲ್ಲ ನಿಜ
ಅವಳು ತಿಲೋತ್ತಮೆಗಿಂತಲೂ ಸ್ವಲ್ಪ ಹೆಚ್ಚು ಸುಂದರಿ ಅನ್ನೋದೂ ನಿಜ
ಆದರೆ ಅವಳು ನಿನಗಾಗಿ ಉಂಟಾದವಳಲ್ಲ.
ಅವಳಿಗೂ ನನಗೂ ತುಂಬಾ ವ್ಯತ್ಯಾಸವಿದೆ
ಅವಳು ಆಕಾಶದಲ್ಲಿ ಮಿನುಗುವ ನಕ್ಷತ್ರ
ನೀನು ಈ ಭೂಮಿ ಮೆಲಿನ ಕಸ ಅದಕ್ಕಾಗಿ ಮನಸೇ ಸುಮ್ನೆ ಸೈಲೆಂಟಾಗಿಬಿಡು
ನಿ ಅವಳಿಗೆ ಯೊಗ್ಯನಲ್ಲ

ನಿಮ್ಮ ಪ್ರೀತಿಯ
ರಾದೇ....ಕಾರಭಾರಿ 

ಮಡಿಲಲ್ಲಿ ಮಲಗಿ ನನ್ನವಳಾಗ್ತಿಯಾ ಅನ್ಕೊಂಡಿದ್ದೆ, ಆದ್ರೆ ನನ್ನೆದೆಯ ಒಡಲಲ್ಲಿ ನೆನಪಾಗಿ ಉಳಿದೆ



ಜೀವನದಲ್ಲಿ ಮೂಡುವ ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿಲ್ಲ
ಆದರೆ ಅದ್ಯಾಕೋ ಗೊತ್ತಿಲ್ಲ ಮನಸ್ಸು ಕೆಳ್ತಾನೇ ಇಲ್ಲ
ಏನೋ ಅನ್ಕೊಂಡಿದ್ದೆ ಮತ್ತೇನು ಆಗೋಯ್ತು

ನನ್ನ ಮಡಿಲಲ್ಲಿ ಮಲಗಿ ನನ್ನವಳು ಆಗ್ತೀಯ ಅನ್ಕೊಂಡಿದ್ದೆ
ಆದರೆ ನನ್ನೆದೆಯಾ ಒಡಲಲ್ಲಿ ನೆಲೆಸಿ ನೆನಪಾಗಿ ಉಳಿದೆ

ನೆನಪುಗಳನ್ನು ನನ್ನ ಎದೆಯಾಳದಿಂದ ಅಳಿಸಿಹಾಕಬೇಕು ಅಂದುಕೊಂಡಿದ್ದೇನೆ ಆದ್ರೆ ಅಗೆದಷ್ಟು ಹೊರಬರ್ತಾಯಿದೆ
ಎನ್ಮಾಡ್ಲಿ?

ನಿಮ್ಮ ಪ್ರೀತಿಯ
ರಾದೇ.....ಕಾರಭಾರಿ 

ಆ ಕಣ್ಣ ಹೊಳಪ ನೋಡದಾದೆನಿಂದು

ಆ ಕಣ್ಣ ಹೊಳಪ ನೋಡದಾದೆನಿಂದು
 ಅವಳ ಕಂಗಳ ಹೊಳಪು  ನೋಡಲಾಗಲಿಲ್ಲ 
ಮತ್ತೇ ಎಲ್ಲಿ ಬಿದ್ದುಹೊಗ್ತಿನಿ ಅನ್ನೋ ಭಯ 

ಅವಳೊಂದಿಗೆ ಮಾತನಾಡಲಾಗಲಿಲ್ಲ 
ಮಾತನಾಡುವಾಗ ಎಲ್ಲಿಯಾದರೂ ತೊದಲಿಬಿಡ್ತಿನೋ ಅನ್ನೋ ಆತಂಕ 

ಸುಂದರ ಕಣ್ಣು, ತಿಕ್ಷ್ಣ ನೋಟ 
ವೈಯಾರದ ನಡಿಗೆ, ಬಿಂಕದ ಸಿಂಗಾರ 
ಇವೆಲ್ಲವನ್ನೂ ನೋಡಿದ ಮೇಲೆ 
ಆ ಬ್ರಹ್ಮ ತುಂಬಾ ಪುರುಸೋತ್ತಿನಿಂದ ಕೆತ್ತಿದ ಕೆತ್ತನೆ ಅವಳದ್ದು 

ಆದರೇನು ಮಾಡಲಿ ನನ್ನ ಮನಸು ಅವಳನ್ನು ರಿಜೆಕ್ಟ್ ಮಾಡಿತು
ಆದರೆ ಹೃದಯ ಬಡಬಡಿಸುತ್ತಿದೆ 
ಮನಸ್ಸು ಕಲ್ಲಾಗಿಬಿಟ್ಟಿದೆ 
ಗುಡಿಯಲ್ಲಿ ಕುಳಿತ ಆ ಕಲ್ಲು ದೇವರಂತೆ 

ಇಂತಿ ನಿಮ್ಮ ಪ್ರೀತಿಯ 
ರಾದೇ.....ಕಾರಭಾರಿ


ಮನಸೇ ಕಾರಣವ ಹೇಳು

ಮನಸೇ ಕಾರಣವ ಹೇಳು


ಮನಸು ಕೇಳ್ತಾ ಇದೆ
ಅವಳು ಯಾಕೆ ಬೇಡವಾದ್ಲು
ಮನಸ್ಸಿಗೆಕೋ ತಳಮಳ
ಅವಳ ನೋಡಿದ ದಿನದಿಂದ ಮುದಗೊಂಡ ಮನಸ್ಸು ಯಾಕೆ ಹೀಗಾಯ್ತು
ಒಂದೇ ಒಂದು ವಿಷಯಕ್ಕಾಗಿ ಪ್ರೀತಿಸಿದ ಹುಡುಗಿ ಬೇಡವಾದಳಾ
ಫುಲ್ಲ್ ಕನ್ಫ್ಯೂಷನ್
ಪ್ರೀತಿ ಪ್ರೇಮ ಪ್ರಣಯ
ಮನಸ್ಸು ಹೃದಯ
ಇದು ಯಾವುದು ನನಗೆ ಇಲ್ಲ ಅನ್ಸುತ್ತೆ
ಭಹುಷ್ಯ ನಾ ಪ್ರೀತಿ ಮಾಡಲಿಕ್ಕೆ ಲಾಯಕ್ಕಿಲ್ಲ
ಪ್ರೀತಿಸಿದ ಹುಡುಗಿನ ಕಾರಣವಿಲ್ಲದೆ ತ್ಯಜಿಸೊದಂದ್ರೆ ಅದು ಕಠೋರ ಮನದವರಿಗೆ ಮಾತ್ರ ಸಾದ್ಯ.
ನಾ ಅಷ್ಟು ಕಠೋರನಾ
ಇದು ಉತ್ತರವಿಲ್ಲದ ಪ್ರಶ್ನೆ.

ಅವಳನ್ನ ನೋಡಿದ ಆ ದಿನವೇ ಮನಸು ಹೇಳ್ ಬಿಡ್ತು ಇವಳೇ ಫಿಕ್ಸ್
ಬಟ್ ಒಂದೇ ಒಂದು ದಿನದಲ್ಲಿ ಮತ್ತೆ ಮನಸ್ಸು ಹೇಳುತ್ತಿದೆ ಇವಳು ಬೇಡ
ಏನಾಗಿದೆ ನನಗೆ ?
ಗೊತ್ತಿಲ್ಲ ಆದರೆ ಮನಸ್ಸು ಮಾನಸ್ಸು ಮಾತ್ರ ಅಳ್ತಾ ಇದೆ ತುಂಬಾ ಅಳ್ತಾ ಇದೆ

ಅವಳು ಬೇಡ ಅಂತ ಹೇಳಿದೆ ಮನಸ್ಸು
ಆದರೆ ಯಾಕೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ
ಬಟ್ ಅವಳನ್ನ ನೆನೆಸಿಕೊಂಡಾಗೆಲ್ಲ ಮನಸ್ಸು ಅಳುತ್ತಿದೆ
ಏನು ಗೊತ್ತಿಲ್ಲ
ಆದ್ರೆ ಈ ಹಾಳಾದ ಮನಸ್ಸಿಗೆ ಅಳೊದೊಂದೆ ಗೊತ್ತು

ಇಂತಿ ನಿನ್ನ ಪ್ರೀತಿಯ
ರಾದೇ....ಕಾರಭಾರಿ

Monday, May 6, 2019

ನಾನವನಲ್ಲ, ನಾನವನಲ್ಲ, ನಾನವನಲ್ಲ

ಮನಸ್ಸು ತುಂಬಾ ವಿಚಿಲಿತಗೊಳ್ಳುತ್ತದೆ

ಕೆಲವೊಮ್ಮೆ ಮನಸ್ಸು ತನ್ನ ಮಿತಿಯ ಕಟ್ಟೆ ದಾಟಿ ಬಿಡುತ್ತೆ.
ನನಗೆ ನಾನೆ ಲಕ್ಣ್ಮಣ ರೇಖೆ ಹಾಕಿಕೊಂಡು ಇದನ್ನ ದಾಟಬೇಡ ಅಂದುಕೊಂಡರೂ ಕೆಲವೊಮ್ಮೆ ಮನಸ್ಸು ತನ್ನ ಮಿತಿ ಉಲ್ಲಂಘನೆ ಮಾಡುತ್ತೆ.
ಮನಸ್ಸು ಮತ್ತು ಹೃದಯಕ್ಕೆ ತುಂಬಾ ವ್ಯತ್ಯಾಸವಿದೆ ಕಣ್ರಿ
ಎರಡೂ ಒಂದರ ಮಾತು ಮತ್ತೊಂದು ಕೆಳಲ್ಲ
ಮನಸ್ಸು ಬಯಸಿದ್ದು ಹೃದಯಕ್ಕಿಷ್ಟವಾಗಲ್ಲ
ಹೃದಯ ಬಯಸಿದ್ದು ಮನಸ್ಸಿಗಿಷ್ಟವಾಗಲ್ಲ
ಆದರೆ ಕೆಲವೊಮ್ಮೆ ಮನಸ್ಸು ಮತ್ತು ಹೃದಯ ಎರಡೂ ಬೆಡ ಎಂದು ಹೆಳಿದನ್ನ ದೆಹ ಮಾಡಿಬಿಡುತ್ತೆ.
ಜೀವನ ಅಂದ್ರೆ ಇದೆ ಅಲ್ವಾ
ಮನಸ್ಸಿನ ಮಾತು ಮತ್ತು ಹೃದಯದ ಮಾತುಗಳಾಚೆ ಎನಾದ್ರೂ ಎಡವಟ್ಟಾದರೆ
ಮನಸ್ಸು ಹೃದಯ ಕೂಗಿ ಕೂಗಿ ಹೆಳುತ್ತೆ.
ನಾನವನಲ್ಲ, ನಾನವನಲ್ಲ, ನಾನವನಲ್ಲ
ಹಾಗಾದರೆ ಯಾರು?
ಗೊತ್ತಿಲ್ಲ
ಕಾಲವೇ ಉತ್ತರಿಸಬೆಕಷ್ಟೆ

ಇಂತಿ ನಿಮ್ಮ ಪ್ರೀತಿಯ
ರಾದೇ.... ಕಾರಭಾರಿ

Sunday, May 5, 2019

ಬದಲಾದ ಭಾವನೆಗಳು

ಅದೆಷ್ಟು ವಿಚಿತ್ರವಲ್ಲವೇ?
ಇಂತಹ ಪರಿಸ್ಥಿತಿ ಬಂದಾಗ ಮನಸು ವಿಲಿ ವಿಲಿ ಒದ್ದಾಡಿಬಿಡುತ್ತದೆ.
ನೂರೊಂದು ನೆನಪು ಎದೆಯಾಳದಿಂದ ಹಾಡಾಗಿಬಂತು ಆನಂದದಿಂದ ಅನ್ನೋ ಪದದ ಸಂಪೂರ್ಣ ರಿವರ್ಸ್  ಈ ಕಲ್ಪನೆಯ  ಸಾಲುಗಳು.
ಪರಮದಯಾಳು ಪರಮದಯಾಮಯ ಸರ್ವಸೃಷ್ಟಿಕರ್ತ ಎಂದೆಲ್ಲ ಕರೆಯಿಸಿಕೊಳ್ಳುವ ಅವನು ಎಲ್ಲರ  ಜೀವನದಲ್ಲಿ ತುಂಬಾ ಆಟವಾಡಿಬಿಡ್ತಾನೆ. 
ಅವನ ಆಟವೆಲ್ಲ  ಮುಗಿದ ಮೇಲೆ ಹೊಸ ಬದುಕ ಹುಡುಕುತ್ತ ಹೊರಟ  ಜೀವನದ ಪಯಣ ಹೇಗೆಲ್ಲ ತಿರುವು ಮುರುವು ಪಡೆಯುತ್ತದೆ ಅನ್ನೋ ನಿದರ್ಷನವೇ ಈ ಸಾಲುಗಳು

ಒಂದು ಹಕ್ಕಿ ಒಂಟಿಯಾಗಿ ತುಂಬಾ ಸುಂದರವಾಗಿ ಆಕಾಶದಲ್ಲಿ ಹಾರಾಡ್ತಾ ಇತ್ತು ಅದನ್ನು ನೋಡಿದ ಮತ್ತೊಂದು ಹಕ್ಕಿ ಅದರ ಜೊತೆಗೂಡಿ ಹತ್ತಿರವಾಯಿತು.
ಭಾವನೆಗಳು ಕನಸುಗಳು ಮೂಡತೊಡಗಿದವು ಪರಮದಯಾಳು ಕಿತ್ತುಕೊಂಡ ನಗುವನ್ನು ಆ ಹಕ್ಕಿ ಕೊಡಬಹುದೋ ಅನ್ನೋ ದೂರದ ಆಸೆ ಒಂಟಿ ಹಕ್ಕಿಯ ಮನದಲ್ಲಿ ಮನೆಮಾಡಿತು 
ಜೊತೆಯಾಗಿ ಹಾರಾಡತೊಡಗಿದ ಹಕ್ಕಿಗಳು ತುಂಬಾ ಅನ್ಯೂನ್ಯವಾದವು
ಇನ್ನೆನ್ನು ಒಂಟಿ ಹಕ್ಕಿ ಜೋತೆಸಿಕ್ಕ ಹಕ್ಕಿಯೊಂದಿಗೆ ಮಾತಾಡುವ ಮೊದಲೇ ಮರೆಯಾಗಿದ್ದ ಅದರ ಜೊತೆಗಾರ ಹಕ್ಕಿಯ ಸಪ್ಪಳ ಕೇಳಿಸಿತು. 
ಒಂಟಿ ಹಕ್ಕಿ ಅಂದುಕೊಂಡಿತು ಅಯ್ಯೋ ಹುಚ್ಚು ಮನಸೆ ನಿನ್ಯಾಕೆ ಹೀಗೆ....
ಮರೆಹಕ್ಕಿಯನ್ನ ನೋಡಿದ ಜೋತೆಹಕ್ಕಿ ಒಂಟಿ ಹಕ್ಕಿಯತ್ತ ತಿರುಗಿ ನಕ್ಕು ಹೇಳಿತು ನೋಡು ನನ್ನ ಜೀವ ಬಂತು..
ಒಂಟಿ ಹಕ್ಕಿ ಜೋತೆಹಕ್ಕಿಯ ಸಂತೋಷ ನೋಡಿ ಉಧ್ಗರಿಸಿತು ಓ ದೇವರೇ ಯಾವತ್ತೂ ಇವರನ್ನ ಸಂತೋಷವಾಗಿಡು 
ಜೋತೆಹಕ್ಕಿ ಮತ್ತು ಮರೆಹಕ್ಕಿಯನ್ನ ಒಟ್ಟಾಗಿ ನೋಡಿ ಸಂತೋಷಗೊಂಡ ಒಂಟಿಹಕ್ಕಿ ತನ್ನ ಭಾವನೆಗಳನ್ನು ಬದಲಾಯಿಸಿಕೊಂಡಿತು ಮತ್ತು ಅವುಗಳನ್ನು ನೋಡಿ ಖುಷಿಪಟ್ಟಿತು
ಯಾವತ್ತೂ ಹೀಗಯೇ ಚನ್ನಾಗಿರಿ ಅಂತ ಹೇಳಿ ದೂರದಲ್ಲಿ ಮತ್ತೆ ಒಂಟಿಯಾಗಿ ನಿಂತುಬಿಟ್ಟಿತು

ಕೊನೆಗೂ ಒಂಟಿ ಹಕ್ಕಿಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ?
ನಾನೇಕೆ ಒಂಟಿ............

ಇಂತಿ ನಿಮ್ಮ ಪ್ರೀತಿಯ
ರಾದೇ.....ಕಾರಭಾರಿ

ದೇವರಿಗೊಂದು ಬಹಿರಂಗ ಸವಾಲು

ಆತ್ಮೀಯ ಓದುಗರೆ
ನಿಮಗಿದೋ ಕೋಟಿ ಕೋಟಿ ನಮನಗಳು
ಇಷ್ಟು ವರ್ಷಗಳವರೆಗೆ ನಾ ಬರೆದಿದ್ದೆಲ್ಲವನ್ನು ತಾವು ಓದಿದ್ದಿರಿ ಮತ್ತು ಇಷ್ಟ ಕೂಡ ಪಟ್ಟಿದ್ದಿರಿ.
ಅಂದು ಬರೆಯಲು ಆರಂಬ ಮಾಡಿದವನು ಇನ್ನೊವರೆಗೂ ಬರೆಯುತ್ತಲೇ ಇದ್ದೇನೆ ಬರೆದದ್ದೆಲ್ಲ ಶಾಸನಗಳೂ ಆಗಲಿಲ್ಲ ಕಾವ್ಯ ಕಾದಂಬರಿಗಳೂ ಆಗಲಿಲ್ಲ ಆದರೆ ಎಷ್ಟೋ ಸಾರಿ ಅಕ್ಷರದೊಷಗಳಾಗಿ ನಿಮ್ಮೆಲ್ಲರಿಂದ ಬೈಸಿಕೊಂಡಿದ್ದೇನೆ ಇನ್ನೂ ಬೈಸಿಕೊಳ್ಳುಳ್ಳುತ್ತಿದ್ದೇನೆ ಮತ್ತು ಬೈಸಿಕೊಳ್ಳುತ್ತೇನೆ.
"ನಾ ಹೆಣವಾಗುವ ಮುನ್ನ"
ತಲೆಬರಹ ಯಾಕೋ ಸರಿ ಅನ್ನಿಸುತ್ತಿಲ್ಲ ಅಂತ ನನ್ನ ಗೆಳೆಯರು ಹೇಳಿದರು ಆದರೂ ಬರಿತಾ ಇದ್ದೇನೆ ಕಾರಣ ಇದರ ತಲೆಬರಹ ಒತ್ತಟ್ಟಿಗಿರಲಿ ನನ್ನ ಹಣೆಬರಹವೇ ಸರಿಯಿಲ್ಲ.
ದೇವರಿಗೊಂದು ಬಹಿರಂಗ ಸವಾಲು

ಅದೇನೋ ಗೊತ್ತಿಲ್ಲ ಆದರೆ ಒಂದಂತೂ ಸತ್ಯ
ನನ್ನ ಜೀವನದಲ್ಲಿ ಆರಂಬವಾಯ್ತು
ಕುರುಕ್ಷೇತ್ರ
ಶಂಖನಾಧ ನಾನೇ ಮೊಳಗಿಸುವೆ
ಆರಂಬವಾಗಲಿ ಘೋರಯುದ್ದ

ಇದು ನನ್ನ ಜೀವನದ ಘಟನೆಗಳ, ಭಾವನೆಗಳ, ಕನಸುಗಳ, ನೆನಪುಗಳ, ನೋವುಗಳ, ಸಂತೋಷಗಳ, ನನಸಾದವುಗಳ, ಕೈಕೊಟ್ಟವುಗಳ, ಸಂಗ್ರಹ
ಇದು ನಿಮ್ಮ ಗೆಳೆಯ ನಡೆದು ಬಂದ ದಾರಿ..
"ನಾ ಹೆಣವಾಗುವ ಮುನ್ನ" ಅನ್ನೋ ತಲೆಬರಹ ಯಾಕೆಂದರೆ ನಾ ಹುಟ್ಟಿದಂದಿನಿಂದ ನೆನಪಿರುವ ಯಲ್ಲವನ್ನು ನಿಮ್ಮ ಮುಂದೆ ಹೇಳಬಯಸಿದ್ದೇನೆ ನಾ ಹೆಣವಾಗುವವರೆಗೆ.

ಇದೊಂದು ಅಂಕಣ
ನಾ ಬರೆದ ಮನದಾಳದ ಮಾತುಗಳು


ಇಂತಿ ನಿಮ್ಮ ಪ್ರೀತಿಯ
ರಾದೇ......ಕಾರಭಾರಿ

"ತಿಳಿಗೇಡಿ ಬದುಕು" ಜೀವನ ಅಂದ್ರೆ ಚಿಂದಿ ಚಿತ್ರನ್ನಾ

 "ತಿಳಿಗೇಡಿ ಬದುಕು" ಜೀವನ ಅಂದ್ರೆ ಚಿಂದಿ ಚಿತ್ರನ್ನಾ

ಬದುಕು ದೊಂಬರಾಟ ಕಣ್ರೀ
ಬದುಕನ್ನು ಎಷ್ಟೇ ನಾಜೂಕಾಗಿ ಸವೆಸಿದರೂ ಎಲ್ಲೋ ಒಂದು ಕಡೆ ಯಡವಿ ಬಿಡ್ತೇವೆ.

ಒಂದು ಹಳ್ಳಿಯಲ್ಲಿ ಒಬ್ಬ ಗೌಡ ಒಂದು ಬಡ ಮಹಿಳೆಗೆ ಉಟ್ಟುಕೊಳ್ಳಲು ಒಂದು ರೇಷ್ಮೆ ಸೀರೆ ಕೊಟ್ಟಿದ್ದನಂತೆ
ಉಪಯೋಗಿಸಿ ಯತಾಸ್ಥಿತಿ ವಾಪಸ್ ತಂದುಕೊಡು ಅಂತ ಕರಾರು ಮಾಡಿದ್ದ
ಮನೆಗೆ ಬಂದ ಮಹಿಳೆ ರೇಷ್ಮೆ ಸೀರೆಯನ್ನು ಉಟ್ಟುಕೊಂಡು ಬಾಗಿಲ ಬಳಿ ನಿಂತಿದ್ದಳು ಆಗ ಮತ್ತೊಬ್ಬಳು ಬಂದು ಹತ್ತಿ ಬಿಡಿಸಲು ಹೊಲಕ್ಕೆ ಹೋಗೋಣು ಬಾ ಅಂತ ಕರೆದ ಕೂಡಲೇ ಅವಳು ಅದೇ ಸೀರೆಯನ್ನು ಉಟ್ಟು ಹೋಗಿಬಿಟ್ಟಳು ಹತ್ತಿ ಬಿಡಿಸುತ್ತ ಬಿಡಿಸುತ್ತ ಉಟ್ಟ ರೇಷ್ಮೆ ಸೀರೆ ಹತ್ತಿ ಮುಳ್ಳಿಗೆ ಸಿಕ್ಕಿ ಚಿಂದಿ ಚಿಂದಿಯಾಯ್ತು.
ಹತ್ತಿಬಿಡಿಸಿದ ಮೇಲೆ ನೋಡ್ತಾಳೆ ಸೀರೆ ಚಿಂದಿಯಾಗಿದೆ.
ನಮ್ಮ ಬದುಕು ಸಹ ಹಾಗೆಯೇ ಆಲ್ವಾ ರೇಷ್ಮೆ ಸೀರೆ ಚಿಂದಿಯಾದ ಹಾಗೆ ಬದುಕು ಚಿಂದಿಯಾಗಿ ಬಿಡುತ್ತದೆ 
ಮಹಿಳೆಗೆ ರೇಷ್ಮೆ ಸೀರೆ ಕೊಟ್ಟ ಆ ಗೌಡ ಒಂದು ದಿನ ಇವಳನ್ನು ಕರೆದು ರೇಷ್ಮೆ ಸೀರೆ ವಾಪಸ್ಸು ಕೊಡು ಅಂತ ಕೇಳ್ತಾನೆ ಆದರೆ ರೇಷ್ಮೆ ಸೀರೆ ಚಿಂದಿಯಾಗಿದೆ 
ಅವಳು ತಲೆ ತಗ್ಗಿಸಿ ನಿಲ್ತಾಳೆ ಗೌಡ ಹೇಳ್ತಾನೆ ಈ ಸೀರೆ ಚನ್ನಾಗಿ ಉಪಯೋಗಿಸಿದ್ದರೆ ನಿನಗೆ ಇನ್ನೊಂದು ಇದಕ್ಕಿಂತ ಉತ್ತಮ ಸೀರೆ ಕೊಡುತ್ತಾ ಇದ್ದೆ ನಿ ಯೋಗ್ಯವಿಲ್ಲದವಳು ನನ್ನ ಕಣ್ಣ ಮುಂದೆ ಕಾಣದೆ ದೂರ ಹೋಗಿಬಿಡು.
ಹಾಗೆಯೇ ಆಲ್ವಾ 
ದೇವರು ಕೊಟ್ಟ ಈ ಪವಿತ್ರ ಮನುಷ್ಯ ಜನ್ಮವನ್ನು ನಾವು ಹತ್ತಿ ಬಿಡಿಸಲು ಹೋದ ಮಹಿಳೆಯಂತೆ ಮಾಡಿಕೊಳ್ಳುತ್ತೇವೆ 
ಜೀವನದ ತುಂಬಾ ಮುಳ್ಳೇ ಮುಳ್ಳು ಕೊನೆಗೂ ಜೀವನ ಚಿಂದಿ ಚಿತ್ರನ್ನಾ 
ಈ ಜೀವನ ಕೊಟ್ಟ ಆ ದೇವರು ಇದನ್ನು ವಾಪಸ್ಸು ಕೇಳಿ ನಮ್ಮ ಲೆಕ್ಕ ಕೇಳಿದಾಗ ತಲೆ ತಗ್ಗಿಸುವುದು ಬಿಟ್ಟರೆ ನಾವು ಇನ್ನೇನು ಮಾಡಲು ಸಾದ್ಯ 

ನಿಮ್ಮಪ್ರೀತಿಯ 
ರಾದೇ....ಕಾರಭಾರಿ
  

Saturday, May 4, 2019

ಅವಳ ಕಣ್ಣ ಸೆಳೆತ

ಅವಳ ಕಣ್ಣಲ್ಲಿ ಸೆಳೆತವಿತ್ತು

ಆ ಸೆಳೆತದಿ ಹೃದಯ ಎಳೆದಂಗಾಯ್ತು
ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ಕೆಳಲಿಲ್ಲ ಮನಸ್ಸು
ಪಟ್ಟಂತ ಹಾರಿ ಹೊಗೇಬಿಡ್ತು.

ಆನಂದ ಪರಮಾನಂದ ನಿತ್ಯಾನಂದ ಹಿಗೆ ಎನೆನೋ ಕಲ್ಪನೆ
ಇಷ್ಟಾದರೂ ಮನಸಿಗೆ ಹೆಳಿದೆ ಕಂಟ್ರೋಲ ಮಾಡ್ಕೊ ಅಂತ
ಆದರೆ ಹೃದಯದಲ್ಲೆನೋ ಢವ ಢವ

ನಿಮ್ಮ ಪ್ರೀತಿಯ
ರಾದೇ....ಕಾರಭಾರಿ


ನನ್ನ ಕ್ಯಾರೆಕ್ಟರ ಸರಿಯಿಲ್ಲ

ನನ್ನ ಕ್ಯಾರೆಕ್ಟರ ಸರಿಯಿಲ್ಲ ಕಣ್ರಿ. ನನ್ನಿಂದ ದೂರವಿರಿ
ದುಷ್ಟರನ್ನು ಕಂಡ್ರೆ ದೂರವಿರಬೆಕಂತ ಹಿರಿಯರು ಹೆಳಿದ್ದಾರೆ


ಅದೆನೋ ಗೊತ್ತಿಲ್ಲ
ನಾನು ಯಾರ ಅಕ್ಕ ತಂಗಿರ ಜೊತೆ ಮಿಂಗಲ ಆಗಿಲ್ಲ ಆದ್ರೂ ಜನ ಹೆಳ್ತಾರೆ ನನ್ನ ಕ್ಯಾರೆಕ್ಟರ ಸರಿಯಿಲ್ಲ.
ಪರಸ್ತ್ರಿಯನ್ನ ತಾಯಿ, ತಂಗಿ, ಮಗಳು ಅಂತ ನನ್ನ ಹೃದಯ ಭಾವಿಸುತ್ತೆ ಆದರೂ ಯಾಕೊ ಗೊತ್ತಿಲ್ಲ ಜನ ಹೆಳ್ತಾರೆ ನನ್ನ ಕ್ಯಾರೆಕ್ಟರ ಸರಿಯಿಲ್ಲ.
ಮುದುವೆಯ ನಂತರ ಶ್ರೀರಾಮನಂತಿರಲು ಬಯಸಿ ನನ್ನ ಹೆಂಡತಿಯನ್ನ ಸೀತೆ ಅನ್ಕೊಂಡಿದ್ದೆ ಆದರವಳು ಪಾಂಚಾಲಿ ಆದರೂ ಜನ ಹೆಳ್ತಾರೆ ನನ್ನ ಕ್ಯಾರೆಕ್ಟರ ಸರಿಯಿಲ್ಲ.
ಹುಟ್ಟಿಸಿದ ಅಪ್ಪ ಅಮ್ಮ
ಒಡಹುಟ್ಟಿದ ತಂಗಿ ತಮ್ಮ
ಬಂದು ಬಳಗ ಎಲ್ಲರೂ ಹಾಗೆ ಹೆಳ್ತಾರೆ ನನ್ನ ಕ್ಯಾರೆಕ್ಟರ ಸರಿಯಿಲ್ಲ.
ಎನೋ ಗೊತ್ತಿಲ್ಲ ನಾ ಸತ್ತ ಮೆಲಾದರೂ ನನ್ನ ಕ್ಯಾರೆಕ್ಟರನ ಕ್ಲ್ಯಾರಿಫೈ ಆಗಬಹುದಾ?

ಎನೆ ಅಂದ್ರು ನಾ ಹೆಣವಾಗುವ ಮುನ್ನ ಜನರಿಗೆ ನನ್ನ ಕ್ಯಾರೆಕ್ಟರ ಪರಿಚಯ ಮಾಡಿಸಲೆ ಬೆಕು

ಇಂತಿ ನಿಮ್ಮ ಪ್ರೀತಿಯ

ರಾದೇ....ಕಾರಭಾರಿ 

ನಾ ಮೋಸಗಾರ

ಅದೆನೊ ಗೊತ್ತಿಲ್ಲ ಕಣ್ರಿ ಆದ್ರೆ ನಾ ಮೋಸಗಾರ ಅಂತನ್ನಿಸ್ತಿದೆ.

ಯಾವಳನ್ನೊ ಕಟ್ಕೊಂಡು ಅಪ್ಪ ಅಮ್ಮನ ಮೋಸ ಮಾಡಿದೆ
ಸ್ವಾಬಿಮಾನದ ಹೆಸರಿನಲ್ಲಿ ನನ್ನ ನಾನೇ ಮೊಸ ಮಾಡ್ಕೊಂಡೆ
ಈಗ ಮತ್ತೆನು ಮಾಡಹೊರಟಿದ್ದೆನೋ ಗೊತ್ತಿಲ್ಲ
ಆದರೆ ಈ ಜೀವನದಲ್ಲಿ ಮತ್ತೆನೋ ಆಗ್ತಿದೆ
ಸೂರ್ಯನ ಶಾಖ ಯಾವತ್ತೂ ಬದಲಾಗಲ್ಲ
ಚಂದ್ರನ ಪ್ರಸನ್ನತೆ ಯಾವತ್ತೂ ಕುಂದಿಹೊಗಲ್ಲ
ನಕ್ಷತ್ರಗಳ ಹೊಳಪು ಯಾವತ್ತೂ ನಶಿಸಿಹೊಗಲ್ಲ
ಕಾರಭಾರಿ ಮನದಾಳದಲ್ಲಿ ಮೂಡಿದ ಭಾವನೆ ಸ್ಥಳಾಂತರವಾಗಲ್ಲ ಅಂತ ಅನ್ಕೊಂಡಿದ್ದೆ.
ಮೊಟ್ಟ ಮೊದಲ ಬಾರಿ ನನ್ನ ಭಾವನೆಗಳೇ ಬದಲಾಯ್ತು.
ಭಾವನೆಗಳು ಬದಲಾದ ಮೆಲೆ ನನ್ನ ನಾ ಪ್ರಶ್ನಿಸಿಕೊಂಡಾಗ ಸಿಗದಾಗಿದೆ ನನಗೆ ಉತ್ತರ.
ಆದರೆ ಒಂದಂತೂ ಸತ್ಯ ಅನ್ನಿಸ್ತು
ನಾನೊಬ್ಬ ಮೋಸಗಾರ
ಭಾವನೆಗಳನ್ನು ಕೊಂದುಹಾಕಿದ ಕಠುಕ
ನಾನೊಬ್ಬ ಮೋಸಗಾರ
ಮನಸ್ಸಿಗೆ ದ್ರೋಹ ಬಗೆದ ಮೋಸಗಾರ
ನಾನೊಬ್ಬ ಮೊಸಗಾರ
ನನ್ನ ಕನಸುಗಳಿಗೆ ಅಂತ್ಯಹಾಕಿದ ಮೋಸಗಾರ
ಈ ಎಲ್ಲಾ ಪ್ರಶ್ನೆಗಳ ಮದ್ಯ ಮತ್ತೊಂದು ಪ್ರಶ್ನೆ
ನಾ ಕಟ್ಟಿಕೊಂಡ ಕನಸುಗಳು ನುಚ್ಚಾದವಾ.

ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ ಈಜುತ್ತಿದ್ದೆನೆ ಯಾಕೆಂದರೆ ಸಮುದ್ರದಲ್ಲಿ ಬಿದ್ದಾಗಿದೆ.

ಮುಂದೆ ಸಂತೋಷದ ಸಾಗರವೋ, ಬದುಕತುಂಬಾ ಕಣ್ಣಿರ ಕಡಲೋ ಗೊತ್ತಿಲ್ಲ.
ಕಾಲವೇ ಉತ್ತರಿಸಲಿ.

ನಿಮ್ಮವನೆ ಆದ
ರಾದೇ......ಕಾರಭಾರಿ


Friday, May 3, 2019

ನಾ ಹೆಣವಾಗುವ ಮುನ್ನ

ನಾನ್ಯಾರು ಯಾರವನು

ಮಾತು ಅಂದ್ರೆ ಮಾತು ಅದು ರಾದೇಯ ಮನದಾಳದ ಮಾತು
ರಾದೇ ಅಂದ ಕೂಡಲೆ ಕೃಷ್ಣನ ರಾದೇ ಅಂದ್ಕೊಬೆಡಿ ಕೃಷ್ಣನ ರಾದೆಯಲ್ಲ ನನ್ನವಳ ರಾದೇ.
ಅವಳ ಇರಾದೆ ಎನಿದೆಯೋ ಗೊತ್ತಿಲ್ಲ ಆದರೂ ಯಾಕೊ ಮನಸು ಅವಳಿಗಾಗಿ ಒಂದು ಕ್ಷಣ ಚಡಪಡಿಸಿತು.
ನಾನ್ಯಾರೊ ಗೊತ್ತಿಲ್ಲ
ನಾನ್ಯಾರವನೊ ತಿಳಿದಿಲ್ಲ
ಆದರೆ ನಾನು ರಾದೇ ಎಂಬುದು ಮಾತ್ರ ನಿಜ.
ಆದರೆ ಅವಳ ಮನದಾಳದ ರಾದೇಯಾ?
ಯಕ್ಷಪ್ರಶ್ನೆ.
ಮನಸು ಕೆಳ್ತಾಇದೆ ತನ್ನ ಪ್ರಶ್ನೆಗೆ ಉತ್ತರ ರಾದೇಯೂ ಕಾಯುತ್ತಿದ್ದಂತಿದೆ ಅದೇ ಉತ್ತರ.
ಸಿಗುವುದೆ... ಸಿಗುವುದೆ.... ಸಿಗುವುದೆ
ನಾನ್ಯಾರು
ಯಾರವನು ಎಂಬ ಉತ್ತರ
ನಿರಿಕ್ಷಿಸಿ ಪ್ರತಿಕ್ಷಣದ ಮನದಾಳದ ಮಾತುಗಳನ್ನು ನಾ ಹೆಣವಾಗುವತನಕ

ಇಂತಿ ನಿಮ್ಮ ಹೃದಯಗಳ್ಳ
ರಾದೇ.....ಕಾರಭಾರಿ